Thursday, March 4, 2010

ಬಾ-ರತಿ



ಭಾರವಾದ ಎದೆ ಚಲ್ಲಿ ನಿಂತ
ಸೌಂದರ್ಯಗಣಿ ನೀನು
ವರ್ಣಿಸಲು ಭಾವನೆಗಳ ಹುಡುಕುತ
ಹೊರಟ ಕವಿ ನಾನು||


ಅಪ್ಸರೆ ರಂಭೆ ನಿನ್ನ ಮುಂದೆ ಇನ್ನೇನು?
ನೀ ಕಾಣಾದಾದಾಗ ಎನ್ನ ಹೃದಯ
ಬರೀ ಖಾಲಿ ಬಾನು||


ನೂರಾರು ಆಸೆಗಳ ಹೆಣೆದು ನಿಂತ
ನನಗೆ ನಿರಾಶೆಗಳ ನೋವು ಕೊಡುವೇಕೆ ನೀನು
ನಿನ್ನ ಕಣ್ಣ ನೋಟ ಬೆರೆತರೂ
ಹೇಳಲಿಲ್ಲ ಏಕೆ ನಾನು?


ಇನ್ನಾದರೂ ನಿನ್ನ ಹೃದಯ ಮುಟ್ಟಿ
ಕೇಳಿಕೋ ನೀನು ಬರೀ ಮಾತುಗಳಲಿ ಸೆಳೆದು
ಸನಿಹಕೆ ಬರಲಿಲ್ಲ ಇನ್ನೂ ನೀನು||


ನಿನ್ನ ಇಂಚು ಇಂಚು ಅಂದವನು
ಭಾವನೆಗಳಲಿ ಹೀರಿದೆ ನಾನು
ಇನ್ನಾದರೂ ಬೇಗ ಬಾ ರತಿ ನೀನು||




ಚಿತ್ರ ಕೃಪೆ : indiastudychannel.com

7 comments:

  1. ಹೇಳಿ ಬಿಡಿ ತಡವೇನು?
    ಹೇಳಿದರೆ ಕೇಳಲೇನು?
    ಮನಸುಗಳು ಬೆರೆತಾಗ ಬಾರಳೇನು?
    ಹೃದಯದಾ ಮಾತುಗಳು ತಟ್ಟವೇನು?
    ಸ೦ಜೂ ಅವರೆ superb!

    ReplyDelete
  2. ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಲು ತಡಮಾಡಬೇಡಿ, ಏಕೆಂದರೆ ಈಗ

    ಭಾವನೆಗಳಿಗೆ ಯಾರು ಬೆಲೆ ಕೊಡುವುದಿಲ್ಲ. ಬೇಗ ಹೇಳಿಬಿಡಿ.

    ಸುಂದರವಾಗಿದೆ ನಿಮ್ಮ ಬೇಡಿಕೆ "ಬಾ-ರತಿ"

    good, keep writing.

    ReplyDelete
  3. @ kussu muliyala_> ಹೇಳಿ ಕೇಳಿ ಮನಸುಗಳ ಮಾತು ಅಲ್ಲವೇ . . ಎಲ್ಲರಿಗೂಎಲ್ಲಕಾಲಕ್ಕೂ ಸಲ್ಲುವ ಮಾತು ! ಧನ್ಯವಾದ ;)

    ReplyDelete
  4. @ Praveen -> ಭಾವನೆಗಳಿಗೆ ಬೇಲೆ ಕೋಡುವುದಿಲ್ಲಾ ಅನ್ನೊದು ನಿಜಾ , ಅದಕ್ಕೂ ಮೇಲಾಗಿ ಈ ಬಿಜಿ ಜೀವನದಲ್ಲಿ ಭಾವನೆಗಳಿದ್ದರೂ ಅವನ್ನಾ ವ್ಯಕ್ತ ಪಡಿಸಲು ಜನರಲ್ಲಿ ಸಮಯವಿಲ್ಲಾ ಅನ್ನೊದೆ ವಿಶಾದ . . ಧನ್ಯವಾದ ಪ್ರವೀಣ. ;)

    ReplyDelete
  5. @ ಮನಮುಕ್ತಾ ->ಧನ್ಯವಾದ ಮನಮುಕ್ತದ ಓಡತಿಗೆ. .!

    ReplyDelete

ಧೂಳು ಕಣವಾದರೂನು ಏಳುತ್ತೆನೆ.